ಮಂಗಳೂರು: 49 ನೆ ವಾರ್ಡ್ ನ ನಾಗೋರಿ ಅಡ್ದ ರಸ್ತೆ ಕಾಂಕ್ರೀಟಿಕರಣವನ್ನು ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಸಾಧ್ಯವಾದಷ್ಟು ಕಾಂಕ್ರೀಟಿ ರಸ್ತೆಗಳನ್ನು ನಿರ್ಮಿಸ ಬೇಕೆಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ನಾಗೋರಿ ಅಡ್ದ ರಸ್ತೆಗೂ ಕಾಂಕ್ರೀಟಿಕರಣ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಹೇಮಂತ ಗರೋಡಿ, ಕೃತಿನ್ ಕುಮಾರ್, ಶ್ರೀಧರ್ ರಾಜ್ ಶೆಟ್ಟಿ, ಲ್ಯಾನ್ಸ್ ಮೊಂತೇರೊ, ಶಶಿಧರ್, ಉಮೇಶ್ ದೇವಾಡಿಗ ಮುಂತಾದವರಿದ್ದರು.