ಮರೋಳಿ ವಾರ್ಡಿನಲ್ಲಿರುವ ಪ್ರೇಮನಗರ ಬಜ್ಜೋಡಿ ಕೂಡು ರಸ್ತೆ ಬಳಿ ಬೃಹತ್ ಚರಂಡಿಗೆ ತಡೆಗೋಡೆ ನಿರ್ಮಾಣಕ್ಕೆ ಇಂದು ತಾರೀಕು 07.04.2016ರಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೊ ರವರು ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು ರೂ. 30.00 ಲಕ್ಷ ಕರ್ನಾಟಕ ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ ಈ ಅನುದಾನವು ಮಂಜೂರಾತಿಯಾಗಿದೆ.

ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ಕೇಶವ ಮರೋಳಿ, ಪ್ರವೀಣ್‍ಚಂದ್ರ ಆಳ್ವ, ವಾರ್ಡು ಅಧ್ಯಕ್ಷರಾದ ಗಂಗಾಧರ ಪೂಜಾರಿ, ಸ್ಟೀವನ್ ಮರೋಳಿ, ನೆಲ್ಸನ್ ಮೊಂತೆರೋ, ಜಯಕರ್ ಸಮರ್ಥ, ಉದಯ ಕುಂದರ್, ಕೃತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.